ಮಂಗಳೂರು: ‘ಜುಲೇಖಾ ಯೆನೆಪೋಯ’ ಸಂಸ್ಥೆಯ ಸಾಧನೆ      ಮೊದಲ ಬಾರಿಗೆ ಮೆದುಳಿನ ಲಿಂಪೋಮಾ ಕಾಯಿಲೆಗೆ ಸ್ವಅಸ್ಥಿ ಮಜ್ಜಿಯ ಕಸಿ 

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 21.  ನಗರದಲ್ಲಿ ಇದೇ ಮೊದಲ ಬಾರಿಗೆ ಮೆದುಳಿನ ಲಿಂಪೋಮಾ ಕಾಯಿಲೆಗೆ ಸ್ವಅಸ್ಥಿ ಮಜ್ಜಿಯ ಕಸಿಯನ್ನು (ಆಟೋಲೋಗಸ್ ಟ್ರಾನ್ಸ್ ಪ್ಲಾಂಟ್) ದೇರಳಕಟ್ಟೆಯ ಜುಲೇಖಾ ಯೆನೆಪೋಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಖ್ಯಾತ ರಕ್ತ ಶಾಸ್ತ್ರಜ್ಞ, ಡಾ| ರಾಜೇಶ್ ಕೃಷ್ಣ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಕದ್ರಿ ಮೂಲದ 59 ವಯಸ್ಸಿನ ವ್ಯಕ್ತಿಯೋರ್ವರು ಮೆದುಳಿನ ಲಿಂಪೋಮಾ ಕಾಯಿಲೆಗೆ ಕೀಮೋಥೆರಪಿಯನ್ನು ಪಡೆಯುತ್ತಿದ್ದರು. ಜುಲೇಖಾ ಯೆನೆಪೋಯ ಆಸ್ಪತ್ರೆಗೆ ಬಂದ ಈ ವ್ಯಕ್ತಿಯನ್ನು ಸ್ವಅಸ್ಥಿ ಮಜ್ಜಿ ಕಸಿಗೆ ಒಳಪಡಿಸಲು ನಿರ್ಧರಿಸಲಾಯಿತು. ಅವರ ಅಸ್ಥಿಮಜ್ಜಿಯನ್ನು ತೆಗೆದು ಶೀತಲೀಕರಿಸಿ, ಥಯೋಟೀಪಾ ಎಂಬ ಕೀಮೋಥೆರಪಿಯನ್ನು ನೀಡಿ ನಂತರ ರೋಗಿಯು ಅಸ್ಥಿಮಜ್ಜಿಯನ್ನು ಪುನಃ ಅಳವಡಿಸಲಾಯಿತು. ಬಳಿಕ ನಾಲ್ಕು ವಾರದಲ್ಲಿ ರೋಗಿಯು ಗುಣಮುಖರಾಗಿದ್ದಾರೆ.

                                                                                                                          

 

 

error: Content is protected !!

Join the Group

Join WhatsApp Group