‘ಕೊರಗ ಸಮುದಾಯವರ ಭೂಮಿ ಸಮಸ್ಯೆಯನ್ನ ಪರಿಹರಿಸಿ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಿ’      ಎ.ಕಿರಣ್ ಕುಮಾರ್ ಕೊಡ್ಗಿ 

(ನ್ಯೂಸ್ ಕಡಬ) newskadaba.c0m ಕುಂದಾಪುರ, ಆ. 21.  ಕೊರಗ ಸಮುದಾಯವರ ಭೂಮಿ ಸಮಸ್ಯೆಯನ್ನು ಅರಣ್ಯ ಇಲಾಖೆ, ಕಂದಾಯ ಇಲಾಖೆ ಸಮನ್ವಯತೆಯಿಂದ ವಿಶೇಷ ಆಧ್ಯತೆಯನ್ನಾಗಿ ತುರ್ತು ಪರಿಹರಿಸಿ, ಹೊಸ ಡೀಮ್ಡ್ ಪಟ್ಟಿಯನ್ನು ಪರಾಮರ್ಶಿಸಿ, ಭಾಗಶಃ ಡೀಮ್ಡ್ ಇರುವಲ್ಲಿ ಹಕ್ಕುಪತ್ರವನ್ನು ನೀಡಲು ಅವಕಾಶ ಇರುವಲ್ಲಿ ಕೂಡಲೇ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅಧಿಕಾರಿಗಳಿಗೆ ಸೂಚಿಸಿದರು.

ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೊರಗ ಸಮುದಾಯ ಎದುರಿಸುತ್ತಿರುವ ಭೂಮಿ ಸಮಸ್ಯೆಯ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

 

error: Content is protected !!

Join the Group

Join WhatsApp Group