ಹೆಮ್ಮಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಹುಂಡಿಯ ಹಣ ಕಳ್ಳತನ      ಸಮೀಪದ ಶಾಲೆಯಲ್ಲಿ ಪತ್ತೆ..!                           

(ನ್ಯೂಸ್ ಕಡಬ) newskadaba.c0m ಕುಂದಾಪುರ, ಆ. 20.  ಹೆಮ್ಮಾಡಿಯ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಹುಂಡಿಯ ಹಣವನ್ನು ಕದ್ದ ಕಳ್ಳ, ಅದನ್ನು ಸಮೀಪದ ಶಾಲೆಯೊಂದರಲ್ಲಿ ಬಿಟ್ಟು ಹೋಗಿರುವುದು ಪತ್ತೆಯಾಗಿದೆ. ದೇಗುಲದಲ್ಲಿ ಸತ್ಯನಾರಾಯಣ ಪೂಜೆ ನಡೆದಿದ್ದು, ಹಣ ಪತ್ತೆಯಾದ ಪವಾಡ ಎಂದು ಸ್ಥಳೀಯರು ತಿಳಿಸಿದ್ದಾರೆ.

ದೇವಸ್ಥಾನದ ಅರ್ಚಕರ ಕಚೇರಿಯಿಂದ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಜೊತೆಗೆ ಪಕ್ಕದ ಮೂರು ಮನೆಗಳಲ್ಲಿ ಅಲ್ಪಸ್ವಲ್ಪ ಹಣವನ್ನೂ ಕದ್ದಿದ್ದಾನೆ ಎನ್ನಲಾಗಿದೆ.

Also Read  ಜಿ. ಪಂ. ಸದಸ್ಯನಿಂದ ಬಾಕ್ಸೈಟ್ ಸಾಗಾಟ ➤ ಪೊಲೀಸರ ದಾಳಿ, ಪ್ರಕರಣ ದಾಖಲು

 

error: Content is protected !!
Scroll to Top