ಕೆಮ್ಮಾರ ಸರಕಾರಿ ಪ್ರಾಥಮಿಕ ಶಾಲೆಗೆ ಕಲರ್ ಪ್ರಿಂಟರ್ ಕೊಡುಗೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಆ. 19. ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿನ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಉದ್ಯಮಿ ಮತ್ತು ಪ್ರಗತಿಪರ ಕೃಷಿಕರೂ ಆದ ಶ್ರೀಯುತ ಪದ್ಮನಾಭ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಶ್ರೀಮತಿ ನಂದನಾ ಪಿ ಶೆಟ್ಟಿ ಇವರು ಕಲರ್ ಪ್ರಿಂಟರನ್ನು ಕೊಡುಗೆಯಾಗಿ ನೀಡಿರುತ್ತಾರೆ.

 

ದಕ್ಷಿಣ ಕನ್ನಡ ಎಸ್‌.ಡಿ.ಎಂ.ಸಿ ಜಿಲ್ಲಾ ಸಮನ್ವಯ ವೇದಿಕೆ ಕಾರ್ಯದರ್ಶಿಯೂ, ಕೆಮ್ಮಾರ ಎಸ್‌.ಡಿ.ಎಂ.ಸಿ ಸದಸ್ಯರೂ ಆದ ಪದ್ಮನಾಭ ಶೆಟ್ಟಿ ಮತ್ತು ಕುಟುಂಬದವರು ಕೆಮ್ಮಾರ ಸರಕಾರಿ ಶಾಲೆಗೆ ನಿರಂತರ ವಿವಿಧ ರೀತಿಯ ಸಹಕಾರವನ್ನು ನೀಡುತ್ತಾ ಬಂದಿರುತ್ತಾರೆ. ಈ ಬಾರಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗಾಗಿ ಕಲರ್ ಫ್ರಿಂಟರನ್ನು ನೀಡಿದ್ದು ಈ ಬಗ್ಗೆ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಯಶ್ರೀ ಎಂ ಹಾಗೂ ಸಹ ಶಿಕ್ಷಕರು ಮತ್ತು ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷರಾದ ಅಝೀಝ್ ಬಿ.ಕೆ ರವರು ಶಾಲಾಭಿವೃದ್ದಿ ಸಮಿತಿ ಪರವಾಗಿ ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ.

error: Content is protected !!

Join the Group

Join WhatsApp Group