”ರಾಷ್ಟ್ರೀಯ ಪ್ರಶಸ್ತಿ ಬಗ್ಗೆ ಕನಸಲ್ಲೂ ಊಹಿಸಿರಲಿಲ್ಲ”        ಸಿನಿಮಾ ನಿರ್ದೇಶಕ ದಿನೇಶ್ ಶೆಣೈ      

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 19.  ಕನ್ನಡದ ಮಧ್ಯಂತರ ಕಿರು ಚಿತ್ರಕ್ಕೆ 2 ರಾಷ್ಟ್ರೀಯ ಪ್ರಶಸ್ತಿಗಳು ಒಲಿದಿದ್ದು, ಪ್ರಶಸ್ತಿ ಘೋಷಣೆಯಾದಾಗ ಸಿನಿಮಾ ನಿರ್ದೇಶಕ ದಿನೇಶ್ ಶೆಣೈ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದರು.

ಮೊದಲು ತಮ್ಮ ಕಿರು ಚಿತ್ರಕ್ಕೆ ಅತ್ಯುತ್ತಮ ಸಂಕಲನ ವಿಭಾಗದಲ್ಲಿ ಸಂಕಲನಕಾರ ಸುರೇಶ್ ಅವರಿಗೆ ಪ್ರಶಸ್ತಿ ಘೋಷಣೆಯಾಗಿದ್ದಕ್ಕೆ ದಿನೇಶ್ ಶೆಣೈ ಸುರೇಶ್ ಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದರು. ಇದಾದ ಕೆಲವೇ ಕ್ಷಣಗಳಲ್ಲಿ ದಿನೇಶ್ ಗೆ ಕರೆ ಮಾಡಿದ ಸುರೇಶ್ ಅರಸ್ ಹೊಸ ನಿರ್ದೇಶಕರ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗಳಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

 

error: Content is protected !!

Join the Group

Join WhatsApp Group