ಗುರುಪುರ ಅಡ್ಡೂರು ಸೇತುವೆ: ಸಂಚಾರ ಮಾರ್ಗದಲ್ಲಿ ಬದಲಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 17. ಮಂಗಳೂರು ತಾಲೂಕಿನ ಸುರತ್ಕಲ್- ಕಬಕ ರಾಜ್ಯ ಹೆದ್ದಾರಿ  101ರ ಕಿ. ಮೀ 29.35 ರಲ್ಲಿನ ಅಡ್ಡೂರು ಸೇತುವೆ ದುಸ್ಥಿತಿಯಲ್ಲಿದ್ದು ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಮುಂದಿನ ಆದೇಶದವರೆಗೆ ಈ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ  ಹಾಗೂ ಸಂಚಾರ ಮಾರ್ಗ ಬದಲಾವಣೆ ಮಾಡುವಂತೆ  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ  ಆದೇಶಿಸಿದ್ದಾರೆ.

ಅಡ್ಡೂರು ಸೇತುವೆಯ ಮೂಲಕ ಸುರತ್ಕಲ್ – ಕಬಕ ರಾಜ್ಯ ಹೆದ್ದಾರಿ  101ರ ರಸ್ತೆಯಲ್ಲಿ ಬಿಸಿ.ರೋಡ್-ಪೊಳಲಿ- ಬೆಂಗಳೂರಿಗೆ ಸಂಚರಿಸುವ ಘನ ವಾಹನಗಳು ಬದಲಿ ರಸ್ತೆಯನ್ನು ಬಳಸಿಕೊಂಡು ಸಂಚರಿಸಬಹುದಾಗಿದೆ.

ಮಂಗಳೂರು- ಗುರುಪುರ ಕೈಕಂಬ ಕಡೆಯಿಂದ ಪೊಳಲಿ ಕಡೆಗೆ ಸಂಚರಿಸುವ ವಾಹನಗಳು :- ಮಂಗಳೂರು- ಸೋಲಾಪುರ್ ರಾಷ್ಟ್ರೀಯ ಹೆದ್ದಾರಿ  169ರಲ್ಲಿ  ಬೈತುರ್ಲಿ ಬಸ್ ಸ್ಟಾಪ್ ನಿಂದ ಬೈತುರ್ಲಿ – ನೀರು ಮಾರ್ಗ – ಕಲ್ಪನೆ – ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಕಲ್ಪನೆ ಜಂಕ್ಷನ್‍ಗೆ ಬಂದು ಸುರತ್ಕಲ್ – ಕಬಕ  ರಾಜ್ಯ ಹೆದ್ದಾರಿ 101 ನ್ನು ಸಂಪರ್ಕಿಸಿ,  ಪೊಳಲಿ ಹಾಗೂ ಬಿಸಿ.ರೋಡ್ ನ  ಎನ್‍ಎಚ್ ಗೆ ಸಂಚರಿಸಬೇಕು.
ಬಿಸಿ.ರೋಡ್- ಪೊಳಲಿ ಕಡೆಯಿಂದ ಮಂಗಳೂರು-ಗುರುಪುರ  ಕೈಕಂಬ ಕಡೆಗೆ ಸಂಚರಿಸುವ ವಾಹನಗಳು :- ಸುರತ್ಕಲ್ – ಕಬಕ ರಾಜ್ಯ ಹೆದ್ದಾರಿ  101ರ ಕಲ್ಪನೆ-ನೀರುಮಾರ್ಗ- ಬೈತುರ್ಲಿ ಜಿಲ್ಲಾ ಮುಖ್ಯ ರಸ್ತೆಯ ಕಲ್ಪನೆ ರಸ್ತೆಯ ಮೂಲಕ  ಬೈತುರ್ಲಿ ಬಸ್‍ಸ್ಟಾಪ್ ಎಂಬಲ್ಲಿ ಮಂಗಳೂರು- ಸೋಲಾಪುರ್- ರಾಷ್ಟ್ರೀಯ ಹೆದ್ದಾರಿ  169 ನ್ನು ಸಂಪರ್ಕಿಸಿ ಮಂಗಳೂರು ಗುರುಪುರ ಕೈಕಂಬ ಕಡೆಗೆ ಸಂಚರಿಸುವಂತೆ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!

Join WhatsApp Group

WhatsApp Share