ವಯನಾಡ್ ಭೂಕುಸಿತ- ಸಂತ್ರಸ್ತರ ರಕ್ಷಣೆ ತಮಿಳುನಾಡು ಮೂಲದ ನರ್ಸ್ ಸಬೀನಾಗೆ ‘ಕಲ್ಪನಾ ಚಾವ್ಲಾ’ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಚೆನ್ನೈ, ಆ. 16. ಕೇರಳದ ವಯನಾಡ್ ನಲ್ಲಿ ಇತ್ತೀಚೆಗೆ ನಡೆದ ಪ್ರಕೃತಿ ದುರಂತದ ಸಂದರ್ಭದಲ್ಲಿ ಧೈರ್ಯ ಮತ್ತು ಸಾಹಸದಿಂದ ಹಲವು ಜೀವಗಳನ್ನು ರಕ್ಷಿಸಿದ್ದನ್ನು ಪರಿಗಣಿಸಿ ತಮಿಳುನಾಡಿನ ನೀಲಗರಿ ಜಿಲ್ಲೆಯ ನರ್ಸ್ ಎ.ಸಬೀನಾ ಅವರನ್ನು ಪ್ರಸಕ್ತ ವರ್ಷದ ‘ಕಲ್ಪನಾ ಚಾವ್ಲ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಭೂಕುಸಿತದಿಂದಾಗಿ ವಯನಾಡಿನ ಮುಂಡಕೈ- ಚೂರಲ್ಮಲ ನಡುವಿನ ಸಂಪರ್ಕ ಕಡಿತಗೊಂಡು ಜನ ಅತಂತ್ರರಾಗಿ, ಸುರಕ್ಷಿತ ಪ್ರದೇಶಗಳಿಗೆ ತೆರಳಲು ಸಾಧ್ಯವಾಗದೇ ಪರಿಹಾರ ಕಾರ್ಯಾಚರಣೆ ದುಸ್ತರವಾಗಿತ್ತು. ತಕ್ಷಣವೇ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ಝಿಪ್ ಲೈನ್ ನಿರ್ಮಿಸಿ ಮತ್ತೊಂದು ಕಡೆಗೆ ಹೋಗಲು ನಿರ್ಧರಿಸಲಾಯಿತು. ಈ ಸಂದರ್ಭ ನರ್ಸ್ ಸಬೀನಾ ತಕ್ಷಣವೇ ಸ್ವಯಂಪ್ರೇರಿತರಾಗಿ ಮುಂದೆ ಬಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

error: Content is protected !!

Join the Group

Join WhatsApp Group