ಅರಂತೋಡು: ಕಾರಿನೆದುರು ನಿಂತು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಯುವಕ ಸ್ಥಳದಲ್ಲೇ ಮೃತ್ಯು ► ಅಮಾಯಕ ಯುವಕನ ಪ್ರಾಣಕ್ಕೆ ಮುಳುವಾದ ತನ್ನದೇ ತಂಡದ ಯುವಕ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ.21. ತಾನು ಕೆಲಸಕ್ಕೆಂದು ತೆರಳಿದ್ದ ಕಾರಿನ ಮುಂಭಾಗದಲ್ಲಿ ನಿಂತು ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ತನ್ನದೇ ತಂಡದಲ್ಲಿದ್ದ ಯುವಕನೋರ್ವ ಕಾರನ್ನು ಚಲಾಯಿಸಿದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಮಂಗಳವಾರದಂದು ಸಂಪಾಜೆ – ಭಾಗಮಂಡಲ ನಡುವಿನ ಚೇರಂಬಾಣೆ ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನು ಅರಂತೋಡು ಸಮೀಪದ ಪಾತೆಟ್ಟಿ ನಿವಾಸಿ ಸುರೇಶ್ ಎಂದು ಗುರುತಿಸಲಾಗಿದೆ. ಈತ ಮಂಗಳವಾರ ಮಧ್ಯಾಹ್ನ ಊಟದ ನಂತರ ತಾನು ತೆರಳಿದ್ದ ಕಾರಿನ ಬೋನೆಟ್ ಬಳಿ ನಿಂತು ಫೋನ್‌ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕೆಲಸಕ್ಕೆ ಹೋಗಿದ್ದ ಇನ್ನೋರ್ವ ಯುವಕ ಕಾರು ಸ್ಟಾರ್ಟ್ ಮಾಡಿದ ಪರಿಣಾಮ ಒಮ್ಮಿಂದೊಮ್ಮೆಲೇ ಮುಂದಕ್ಕೆ ಚಲಿಸಿದ ಕಾರು ಸುರೇಶ್ ಅವರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಸುರೇಶ್ ನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆನ್ನಲಾಗಿದೆ. ಸ್ಥಳಕ್ಕೆ ಭಾಗಮಂಡಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕಣ ದಾಖಲಿಸಿಕೊಂಡಿದ್ದಾರೆ.

Also Read  ಉಳ್ಳಾಲ: ನೀರಿನ ಟ್ಯಾಂಕರ್ ಹರಿದು ಗಂಭೀರ ಗಾಯಗೊಂಡಿದ್ದ 5 ವರ್ಷದ ಮಗು ಮೃತ್ಯು.!

error: Content is protected !!
Scroll to Top