ನೆಲ್ಯಾಡಿ: ಬಾಲಯೇಸು ದೇವಾಲಯದಲ್ಲಿ ರಾಷ್ಟ್ರೀಯ ಯುವ ದಿನ ಆಚರಣೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆ. 13. ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಇಲ್ಲಿನ ಬಾಲಯೇಸು ದೇವಾಲಯದಲ್ಲಿ ನಡೆದ ದಿವ್ಯ ಬಲಿಪೂಜೆಯಲ್ಲಿ ಯುವ ಜನರಿಗೋಸ್ಕರ ವಿಶೇಷವಾಗಿ ಪ್ರಾರ್ಥಿಸಲಾಯಿತು. ನಂತರ ದೇವಾಲಯದ ವಂದನೀಯ ಗುರುಗಳಾದ ಫಾ| ಗ್ರೇಶನ್ ಅಲ್ವಾರಿಸ್ ರವರು ಯುವಜನರನ್ನು ಕುರಿತು ಮಾತನಾಡಿದರು ಹಾಗೂ ಆ ದಿನದ ಮಹತ್ವವನ್ನು ತಿಳಿಸಿದರು.‌ ಒಂದು ಗಂಟೆಗಳ ಕಾಲ ಅವರೊಂದಿಗೆ ಸೇರಿ ಮುಂದಿನ ದಿನಗಳಲ್ಲಿ ಮಾಡುವ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿ ಒಂದು ಪಟ್ಟಿಯನ್ನು ತಯಾರಿಸಲಾಯಿತು. ಯುವ ಸಮುದಾಯವು ಸಂಘಟಿತವಾಗಿದ್ದರೆ ಧರ್ಮಕೇಂದ್ರವನ್ನು ಇನ್ನಷ್ಟು ಬಲಿಷ್ಠಗೊಳಿಸಬಹುದೆಂದು ಧರ್ಮಗುರುಗಳು ತಮ್ಮ ಸಂದೇಶವನ್ನು ನೀಡಿದರು. ಈ ಕಾರ್ಯಕ್ರಮಕ್ಕೆ 26 ಯುವ ಜನರು ಭಾಗಿಯಾಗಿದ್ದರು. ಐಸಿವೈಎಂ ಸಚೇತಕಿ ಸಿಸ್ಟರ್ ಸರಿತಾ ಡಿಸೋಜ ಹಾಗೂ ವೈ.ಸಿ.ಎಸ್ ಸಚೇತಕಿ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಶ್ರೀಮತಿ ನಿಶ್ಮಿತಾ ಡಿಸೋಜ ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group