ಮಹಾಮಾರಿ ‘ಡೆಂಗ್ಯೂ’ಗೆ 14ರ ಬಾಲಕ ಬಲಿ..!

(ನ್ಯೂಸ್ ಕಡಬ) newskadaba.com ಗದಗ, ಆ. 12. ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ 14 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಗದಗದಿಂದ ವರದಿಯಾಗಿದೆ.


ಮೃತ ಬಾಲಕನನ್ನು ಗದಗ ನಗರದ ಕ್ರಿಕೆಟ್ ಆಟಗಾರ 14 ವರ್ಷದ ಚಂದ್ರಣ್ಣ ಮನಗುಂಡಿ ಎಂದು ಗುರುತಿಸಲಾಗಿದೆ. ತೀವ್ರತರದ ಜ್ವರದಿಂದ ಬಳಲುತ್ತಿದ್ದ ಹಿನ್ನಲೆ ಚಂದ್ರಣ್ಣನನ್ನು ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಗದಗ ಕ್ರಿಕೆಟರ್ಸ್ ಕ್ಲಬ್ ಮತ್ತು ಜಾನೋ ಪಂತರ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟರ್ ಆಗಿದ್ದ ಚಂದ್ರಣ್ಣ ಇತ್ತೀಚೆಗೆ ಹುಬ್ಬಳ್ಳಿ ಪ್ರೀಮಿಯರ್ ಲೀಗ್ ನಲ್ಲಿ 14 ವರ್ಷದೊಳಗಿನ ವಿಭಾಗಕ್ಕೆ ಆಯ್ಕೆಯಾಗಿದ್ದನು.

Also Read  ಪುತ್ತೂರು - ಕಡಬದಲ್ಲಿ ಇಂದು 12 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

error: Content is protected !!
Scroll to Top