ಜಾನುವಾರುಗಳ ಆಕಸ್ಮಿಕ ಸಾವು- ಅನುಗ್ರಹ ಯೋಜನೆಯಡಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 14. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಅನುಗ್ರಹ ಯೋಜನೆಯಡಿ ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರಿಗೆ ಗರಿಷ್ಠ 10,000 ಪರಿಹಾರ ಧನ ವಿತರಿಸಲಾಗುತ್ತದೆ.

ಸದರಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ ಎರಡು ಕಂತುಗಳಲ್ಲಿ ಒಟ್ಟು ರೂ. 44 ಲಕ್ಷ ಅನುದಾನ ಹಂಚಿಕೆಯಾಗಿದೆ. ಆಕಸ್ಮಿಕ ಮರಣ ಹೊಂದಿದ ರಾಸುಗಳ (ಹಸು, ಎಮ್ಮೆ, ಎತ್ತು, ಕುರಿ/ಆಡು/ಮೇಕೆ) ಜಾನುವಾರು ಮಾಲೀಕರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಗ್ರಾಮ ಪಂಚಾಯತ್‌ ಚುನಾವಣೆ ದಿನಾಂಕ ಘೋಷಣೆ ➤ ಡಿ. 22 ಮತ್ತು ಡಿ.27ರಂದು ಚುನಾವಣೆ

error: Content is protected !!
Scroll to Top