ಪುತ್ತೂರು: ಅಂಗಡಿಯೊಂದರ ಮುಂದೆ ಅವಿವಾಹಿತ ಆತ್ಮಹತ್ಯೆ..!

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 11. ಅವಿವಾಹಿತ ಕಾರ್ಮಿಕರೋರ್ವರು ಸ್ಥಳೀಯ ಅಂಗಡಿಯೊಂದರ ಹೊರಗಡೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.11 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಬಡಗನ್ನೂರು ಗ್ರಾಮದ ಪೆರಿಗೇರಿ ನಿವಾಸಿ ಪೆರಿಗೇರಿ ದಿ.ಅಪ್ಪಯ್ಯ ನಾಯ್ಕ ಅವರ ಪುತ್ರ ಜಾನು ನಾಯ್ಕ (45) ಎಂದು ಗುರುತಿಸಲಾಗಿದೆ. ಅವರು ಮನೆಯ ಸಮೀಪದಲ್ಲಿನ ದುರ್ಗಾಸ್ಟೋರ್ ಎಂಬ ಅಂಗಡಿಯ ಎದುರು ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Also Read  ಬಿಸಿ ರೋಡ್: ಭೀಕರ ರಸ್ತೆ ಅಪಘಾತ - ಪತ್ನಿ ಮೃತ್ಯು, ಪತಿ ಗಂಭೀರ

error: Content is protected !!
Scroll to Top