ಹಾರೆಯಿಂದ ಹೊಡೆದು ವ್ಯಕ್ತಿಯ ಕೊಲೆ ► ಭಾನುವಾರ ಬೆಳಿಗ್ಗೆ ಘಟನೆ ಬೆಳಕಿಗೆ

(ನ್ಯೂಸ್ ಕಡಬ) newskadaba.com ಕಾಪು, ಫೆ.11. ಠಾಣಾ ವ್ಯಾಪ್ತಿಯ ಕಟಪಾಡಿ ಸಮೀಪದ ಎಂಬಲ್ಲಿ ಶನಿವಾರ ರಾತ್ರಿ ಹಾರೆಯಿಂದ ಬಡಿದು ವ್ಯಕ್ತಿಯೋರ್ವರನ್ನು ಕೊಲೆಗೈಲಾಗಿದ್ದು, ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಕೊಲೆಗೀಡಾದ ವ್ಯಕ್ತಿಯನ್ನು ಉತ್ತರಭಾರತದ ಕಾರ್ಮಿಕ ಎಂದು ಶಂಕಿಸಲಾಗಿದ್ದು, ವಿವರ ಇನ್ನಷ್ಟೇ ಪತ್ತೆಯಾಗಬೇಕಾಗಿದೆ. ಕಟಪಾಡಿಯ ಅಚ್ಚಡ ಕ್ರಾಸ್ ಬಳಿ ಮರಳಿನ ರಾಶಿಯ ಮೇಲೆ ಮೃತದೇಹವು ಬಿದ್ದಿರುವುದು ಕಂಡುಬಂದಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

error: Content is protected !!
Scroll to Top