ದೇವರ ಆಶೀರ್ವಾದದಿಂದ ಫ್ರೀ ವಿದ್ಯುತ್ ಪೂರೈಕೆ ಸಾಧ್ಯ- ಕೇಜ್ರಿವಾಲ್

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 23. ದೇವರ ಆಶೀರ್ವಾದ ಇರುವುದರಿಂದ ತಮ್ಮ ಸರಕಾರ ದಿನದ 24 ಗಂಟೆಯೂ ಉಚಿತ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗುತ್ತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಬಿಜ್ವಾಸನ್ ಅಸೆಂಬ್ಲಿ ವಿಭಾಗದ ಮಹಿಪಾಲ್‍ಪುರ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಎಪಿ ಆಡಳಿತವಿರುವ ದೆಹಲಿ ಮತ್ತು ಪಂಜಾಬ್ ಎರಡು ರಾಜ್ಯಗಳು ಮಾತ್ರ ಉಚಿತ ವಿದ್ಯುತ್ ನೀಡುತ್ತಿವೆ ಎಂದು ಹೇಳಿದರು. ಆದರೆ ಇತರ ರಾಜ್ಯಗಳಲ್ಲಿ ಜನರು ಹೆಚ್ಚಿನ ಬಿಲ್ ಪಾವತಿಸುತ್ತಿದ್ದಾರೆ ಮತ್ತು ಇನ್ನೂ ಗಂಟೆಗಳ ಕಾಲ ವಿದ್ಯುತ್ ಕಡಿತವನ್ನು ಎದುರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

Also Read  ಜನಪ್ರಿಯತೆಗಾಗಿ ದ್ವೀಪಗಳ ಮರುನಾಮಕರಣ..! ➤ ಮಮತಾ ಬ್ಯಾನರ್ಜಿ

error: Content is protected !!
Scroll to Top