ಮಠದ ಪಲ್ಲಕ್ಕಿಯ ಕೆಳಗಡೆ 50 ಲಕ್ಷ ರೂ. ಪತ್ತೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 21. ಚೈತ್ರಾ ಕುಂದಾಪುರ ಅವರ ಟಿಕೆಟ್‌ ಕೊಡಿಸುವುದಾಗಿ ವಂಚಿಸಿದ ಪ್ರಕರಣಕ್ಕೆ ಮತ್ತೊಂದು ರೋಚಕ ತಿರುವು ಸಿಕ್ಕಿದ್ದು, ಹಾಲಶ್ರೀ ಸ್ವಾಮೀಜಿ ಅವರನ್ನು ಬಂಧಿಸಿದ ಸಿಸಿಬಿ ಪೊಲೀಸರು ಹಣದ ಮೂಲ ಪತ್ತೆ ಹಚ್ಚುತ್ತಿದ್ದಾರೆ.

ತನಿಖೆಯ ವೇಳೆ ಹಾಲಶ್ರೀ ಮಠದಲ್ಲಿ ಪಲ್ಲಕ್ಕಿ ಕೆಳಗೆ ಇರಿಸಲಾಗಿದ್ದ 500 ರೂ. ಮುಖಬೆಲೆಯ 50 ಲಕ್ಷಕ್ಕೂ ಅಧಿಕ ಹಣ ಪತ್ತೆಯಾಗಿದೆ. ಇದನ್ನು ಟಿಕೆಟ್‌ಗಾಗಿ ಪಡೆದ ಹಣ ಎಂದು ಸೀಜ್ ಮಾಡಲಾಗಿದೆ.

ಚೈತ್ರ ಬಂಧನದ ಬಳಿಕ ಕಳೆದ ವಾರದಿಂದ ಸಿಸಿಬಿ ಪೊಲೀಸರು ವಂಚನೆ ಪ್ರಕರಣದ ಹಣದ ಮೂಲಕ್ಕಾಗಿ ಹುಡುಕಾಟ ನಡೆಸಿದ್ದರು. ಇದೀಗ ವಿಜಯನಗರ ಜಿಲ್ಲೆಯ ಹಿರೇಹಡಗಲಿಯ ಹಾಲಮಠದಲ್ಲಿ ಹುಡುಕಾಟ ನಡೆಸಿದಾಗ ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

error: Content is protected !!

Join the Group

Join WhatsApp Group