‘ರಾಜ್ಯದಲ್ಲಿ ಯಾರು ಏನು ಮಾಡಿದ್ದಾರೆ ? ಎಲ್ಲವೂ ನನಗೆ ಗೊತ್ತಿದೆ’..! ➤ ಡಿ.ಕೆ ಶಿವಕುಮಾರ್‌ ತಿರುಗೇಟು

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.05. ರಾಜ್ಯದಲ್ಲಿ ಯಾರು ಏನಿದ್ದಾರೆ. ?ಅವರು ಏನು ಮಾಡಿದ್ದಾರೆ ? ಎಲ್ಲವೂ ನನಗೆ ಗೊತ್ತಿದೆ. ಆದರೆ, ನಾನು ಬಾಯಿ ಬಿಟ್ಟು ಏನು ಹೇಳುವುದಿಲ್ಲ ಎಂದರು. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ನಾನು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಪಕ್ಕೆ ಉತ್ತರಿಸಿದ ಅವರು,  ಹಿಂದೆ ನಾನು ಕುಮಾರಣ್ಣನ ಕೈ ಕೆಳಗೆ ಕೆಲಸ ಮಾಡಿದ್ದೇನೆ. ಅಣ್ಣನ ಕುರಿತು ನನಗೂ ಒಂದಷ್ಟು ಗೊತ್ತಿವೆ. ಅಣ್ಣನ ವಿಚಾರ ತಮ್ಮನಿಗೆ ಗೊತ್ತಿರುವುದಿಲ್ಲವೇ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಲೋಕಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ನಾನು ಯಾವ ಕೇಂದ್ರ ಅಧಿಕಾರಿಗೂ, ಸಂಸ್ಥೆಗೂ ಹಣ ಕೊಡಬೇಕಿಲ್ಲ. ಅದಕ್ಕಾಗಿ ಬಿಡಿಎ ಅಧಿಕಾರಿಗಳಿಗೆ ನಾನು ಹಣ ಕೇಳಿಲ್ಲ ಅಂತಹ ದಾಖಲೆಗಳು ಕುಮಾರಸ್ವಾಮಿ ಅವರ ಬಳಿ ಇದ್ದರೆ ದಾಖಲೆ ಕೊಡಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

 

 

error: Content is protected !!

Join the Group

Join WhatsApp Group