(ನ್ಯೂಸ್ ಕಡಬ) newskadaba.com ಕುಂತೂರು, ಆ. 04. “ಕರ್ನಾಟಕ ರಾಜ್ಯ ಭಾವೈಕ್ಯತ ಪರಿಷತ್” ವತಿಯಿಂದ ಮಂಗಳೂರಿನಲ್ಲಿ ನಡೆದ ರಾಜ್ಯದ ವಿವಿಧ ಭಾಗದ ಕವಿಗಳು ಭಾಗವಹಿಸುವ ರಾಜ್ಯಮಟ್ಟದ ಕವಿ ಗೋಷ್ಠಿಯಲ್ಲಿ ಭಾಗವಹಿಸಿ ಮಾರ್ ಇವಾನಿಯೋಸ್ ಶಿಕ್ಷಕ-ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಾದ ಶ್ರೀ ಮಂಜುನಾಥ್ ಹುಟ್ಟಗನ್ನ ಹಾಗೂ ಶ್ರೀ ಝುನೈಫ್ ಪಾಲ್ಗೊಂಡು ತಮ್ಮ ಸ್ವ-ರಚಿತ ಕವನ ವಾಚಿಸಿ “ಕಾವ್ಯಶ್ರೀ ಪ್ರಶಸ್ತಿ”ಯನ್ನು ಸ್ವೀಕರಿಸಿದರು.
ಕುಂತೂರು: ಮಾರ್ ಇವಾನಿಯೋಸ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳಿಗೆ “ಕಾವ್ಯಶ್ರೀ ಪ್ರಶಸ್ತಿ”
