ಇಚ್ಲಂಪಾಡಿ: ಕಾಡಾನೆ ದಾಳಿ ಪ್ರದೇಶಕ್ಕೆ ಕಾಂಗ್ರೆಸ್ ಮುಖಂಡರ ಭೇಟಿ; ಪರಿಶೀಲನೆ

(ನ್ಯೂಸ್ ಕಡಬ)newskadaba.com  ನೆಲ್ಯಾಡಿ, ಆ.03. ಕೆಲ ದಿನದ ಹಿಂದೆ ಆನೆ ದಾಳಿಯಿಂದ ಹಾನಿಗೊಂಡ ಇಚ್ಲಂಪಾಡಿಯ ಗುಂಡಿಕಂಡ, ಬಿಜೇರು, ನಡುಮನೆ ಕ್ರಾಸ್ ಪ್ರದೇಶಕ್ಕೆ ಕೆಪಿಸಿಸಿ ಸಂಯೋಜಕ, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯಾಗಿದ್ದ ಜಿ. ಕೃಷ್ಣಪ್ಪರವರ ನೇತೃತ್ವದಲ್ಲಿ ಕಾಂಗ್ರೇಸ್ ಮುಖಂಡರ ನಿಯೋಗವೊಂದು ಪರಿಶೀಲನೆ ನಡೆಸಿದೆ ಎನ್ನಲಾಗಿದೆ.

ಕಾಡಾನೆ ದಾಳಿಯಿಂದ ಆಗಿರುವ ನಷ್ಟದ ಕುರಿತಂತೆ  ವಲಯಾರಣ್ಯಧಿಕಾರಿಯವರಿಂದ ಮಾಹಿತಿ ಪಡೆದುಕೊಂಡ ಜಿ.ಕೃಷ್ಣಪ್ಪ, ಪರಿಹಾರ ಒದಗಿಸಿ ಕೊಡುವ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.

Also Read  ಮಂಗಳೂರು: ಶಾಂತಿ ಕಾಪಾಡುವಂತೆ ಮಸೀದಿಯ ಮೈಕ್ ನಲ್ಲಿ ಅನೌನ್ಸ್ ➤ ಅಕ್ರೋಶಭರಿತರನ್ನು ಸಮಾಧಾನಪಡಿಸಿದ ಮುಸ್ಲಿಂ ಮುಖಂಡರ ನಡೆ

 

error: Content is protected !!
Scroll to Top