ರೈಲ್ವೇ ಹಳಿಯ ಗುಜರಿಯನ್ನು ಕದ್ದು ಸಾಗಾಟ – ಕಡಬದ ಇಬ್ಬರ ಬಂಧನ

Theft, crime, Robbery

(ನ್ಯೂಸ್ ಕಡಬ) newskadaba.com ಕಡಬ, ಆ. 02. ಯುವಕರಿಬ್ಬರು ರೈಲ್ವೇ ಹಳಿಯ ಸಾಮಾಗ್ರಿಗಳನ್ನು ಕಳವು ನಡೆಸಿ ಗುಜರಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ವೇಳೆ ಕಡಬ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಮರ್ಧಾಳದಿಂದ ವರದಿಯಾಗಿದೆ.

ಆರೋಪಿಗಳನ್ನು ರಫೀಕ್ ಹಾಗೂ ಸಿದ್ದೀಕ್ ಎಂದು ಗುರುತಿಸಲಾಗಿದೆ. ಇವರು ಪುತ್ತೂರು ಭಾಗದಿಂದ ರೈಲ್ವೇ ಸಾಮಾಗ್ರಿಗಳನ್ನು ಕಳವು ಮಾಡಿ 800 ಕಾರಿನಲ್ಲಿ ತರುತ್ತಿದ್ದ ವೇಳೆ ಗಸ್ತು ನಿರತ ಕಡಬ ಎಸ್.ಐ. ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಬಳಿಕ ಅವರನ್ನು ವಶಕ್ಕೆ ಪಡೆದುಕೊಂಡು ರೈಲ್ವೇ ಪೋಲಿಸರಿಗೆ ಹಸ್ತಾಂತರಿಸಲಾಗಿದೆ.

Also Read  73ನೇ ಗಣರಾಜ್ಯೋತ್ಸವ ಆಚರಣೆ- ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗದ ಚಾಲಕರಿಗೆ ಚಿನ್ನದ ಪದಕ ವಿತರಣೆ ➤ ಕೃಷಿ, ಉದ್ಯಮ, ಸಂಸ್ಕೃತಿ ಸ್ನೇಹಿ ಜಿಲ್ಲೆಯನ್ನಾಗಿ ದ.ಕ. ಅಭಿವೃದ್ಧಿ- ಸಚಿವ ವಿ. ಸುನೀಲ್ ಕುಮಾರ್

error: Content is protected !!
Scroll to Top