ಪೊಲೀಸರ ಕರ್ತವ್ಯಕ್ಕೆ ಅಡ್ಡಿ- ತೃತೀಯ ಲಿಂಗಿಗಳು ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 31. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ 13 ಮಂದಿ ತೃತೀಯ ಲಿಂಗಿಗಳನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನಗರದ ಕುಂಟಿಕಾನದ ಮೇಲ್ಸೇತುವೆಯ ಕೆಳಗೆ ತೃತೀಯ ಲಿಂಗಿಗಳು ಬಲವಂತದಿಂದ ಹಣ ವಸೂಲಿ, ಸಾರ್ವಜನಿಕರಿಗೆ ಕಿರುಕುಳ ಇನ್ನಿತರ ಕೃತ್ಯ ನಡೆಸುತ್ತಿದ್ದುದರ ಕುರಿತು ಉರ್ವ ಪೊಲೀಸರಿಗೆ ದೂರು ನೀಡಲಾಗಿತ್ತು.


ಮಾಹಿತಿಯಂತೆ ಸ್ಥಳಕ್ಕೆ ತೆರಳಿದ ಪೊಲೀಸರು, ತೃತೀಯ ಲಿಂಗಿಗಳನ್ನು ವಿಚಾರಿಸಿದ್ದರು. ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಬಂಧಿಸಲಾಗಿದೆ.

Also Read  ಮಹಿಳೆಯರೇ ಸವ್ಯಸಾಚಿಗಳು ➤ ಡಾ|| ಚೂಂತಾರು

error: Content is protected !!
Scroll to Top