ವನ್ಯ ಪ್ರಾಣಿ ಬೇಟೆ- ಇಬ್ಬರ ಬಂಧನ ! -ನಾಲ್ವರು ಪರಾರಿ

(ನ್ಯೂಸ್ ಕಡಬ)newskadaba.com ಹುಣಸೂರು, ಜು.22. ನಾಗರಹೊಳೆ ಉದ್ಯಾನವನದಲ್ಲಿ ಜಿಂಕೆ ಭೇಟೆಯಾಡಿ, ಜೋಳದ ಹೊಲದಲ್ಲಿ ಬಚ್ಚಿಟ್ಟಿದ್ದ ಮಾಂಸ, ಕೃತ್ಯಕ್ಕೆ ಬಳಸಿದ್ದ ಪರಿಕರಗಳನ್ನು ವಶಪಡಿಸಿಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ಹುಣಸೂರಿನಲ್ಲಿ ವರದಿಯಾಗಿದೆ.


ಬಂಧಿತ ಆರೋಪಿಗಳನ್ನು ಪ್ರದೀಪ್ ಅಲಿಯಾಸ್ ಕುಂಡ, ಮಧು ಎಂದು ಗುರುತಿಸಲಾಗಿದೆ. ಉಳಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.

error: Content is protected !!
Scroll to Top