ಅಪಘಾತ- ಮೂವರು ಮೃತ್ಯು- ಮಾನವೀಯತೆ ಮೆರೆದ ಪುತ್ತೂರಿನ ಯುವಕರು

(ನ್ಯೂಸ್ ಕಡಬ) newsksdaba.com ಪಿರಿಯಾಪಟ್ಟಣ, ಜು. 18. ನಿಂತಿದ್ದ ಟ್ರ್ಯಾಕ್ಟರ್​ಗೆ ಕಾರು ಡಿಕ್ಕಿ ಹೊಡೆದು ಮೂವರು ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಂಪ್ಲಾಪುರ ಬಳಿ ಇಂದು ಬೆಳ್ಳಂಬೆಳಗ್ಗೆ ನಡೆದಿದೆ.

ಮೃತಪಟ್ಟವರನ್ನು ಮುದಾಸೀರ್, ಮುಜಾಯಿದ್ ಹಾಗೂ ಅಹ್ಮದ್​​​ ಪಾಷಾ ಎಂದು ಗುರುತಿಸಲಾಗಿದೆ.


ಇನ್ನುಳಿದ ಮೂವರಿಗೆ ಗಾಯಗಳಾಗಿದ್ದು, ಸ್ಥಳದಲ್ಲಿದ್ದ ಪುತ್ತೂರು ಮೂಲದ ಯುವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಬಿ.ಎಂ.ಟಿ.ಸಿ. ಬಸ್ ಚಾಲಕನಿಗೆ ಚಲಿಸುತ್ತಿದ್ದಾಗಲೇ ಹೃದಯಾಘಾತ – ಸಮಯ ಪ್ರಜ್ಞೆಯಿಂದ ಬಚಾವ್!

error: Content is protected !!
Scroll to Top