ಅಂಗಡಿ ಬೀಗ ಮುರಿದು ಜ್ಯೂಸ್ ಕುಡಿದು ನಗದು ಕದ್ದು ಪರಾರಿಯಾದ ಕಳ್ಳರು..!

(ನ್ಯೂಸ್ ಕಡಬ) newskadaba.com ಸುಳ್ಯ, ಜು. 12. ಎರಡು ಅಂಗಡಿಗಳ ಬೀಗ ಮುರಿದು ಒಳನುಗ್ಗಿದ ಕಳ್ಳರು ಡ್ರಾಯರ್ ನಲ್ಲಿರಿಸಲಾಗಿದ್ದ ನಗದು ದೋಚಿ ಪರಾರಿಯಾದ ಘಟನೆ ಆಲೆಟ್ಟಿ ಗ್ರಾಮದಲ್ಲಿ ನಡೆದಿದೆ.

ಆಲೆಟ್ಟಿ ಗ್ರಾಮದ ನಾಗಪಟ್ಟಣ ಬಸ್ ನಿಲ್ದಾಣದ ಬಳಿ ಪಂಚಾಯತ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಪುಷ್ಪರಾಜ್ ಎಂಬವರ ಅಂಗಡಿಯ ಡ್ರಾಯರ್ ನಿಂದ 500 ರೂ. ಹಾಗೂ ಫ್ರಿಡ್ಜ್ ನಲ್ಲಿರಿಸಲಾದ ಜ್ಯೂಸ್ ಕುಡಿದಿದ್ದಾರೆ. ಮಿತ್ತಡ್ಕ ರೋಟರಿ ಶಾಲಾ ಮುಂಭಾಗದಲ್ಲಿನ ಬಸ್ ನಿಲ್ದಾಣದ ಪಂಚಾಯತ್ ಕಟ್ಟಡದಲ್ಲಿರುವ ದಾಮೋದರ ಎಂಬವರ ಅಂಗಡಿಯಿಂದ ಹತ್ತು ಸಾವಿರ ರೂಪಾಯಿ ಕಳ್ಳತನವಾಗಿರುವುದು ವರದಿಯಾಗಿದೆ.

error: Content is protected !!

Join the Group

Join WhatsApp Group