(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.08. ಸದನದಲ್ಲಿ 135 ಕಾಂಗ್ರೆಸ್ ಶಾಸಕರಿದ್ದರೂ, ಕೇವಲ 19 ಶಾಸಕರನ್ನು ಹೊಂದಿರುವ ಜೆಡಿಎಸ್ ಪಕ್ಷವು ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಡಿ ಮೊದಲ ಅಧಿವೇಶನದಲ್ಲೇ ಜಯ ಸಾಧಿಸಿದೆ.
![](https://i0.wp.com/newskadaba.com/wp-content/uploads/2023/06/IMG-20230626-WA0000-1024x777.jpg?resize=1024%2C777&ssl=1)
ನಾಗಮಂಗಲದ ಕೆಎಸ್ಸಾರ್ಟಿಸಿ ಬಸ್ ಚಾಲಕನ ಆತ್ಮಹತ್ಯೆ ಯತ್ನದಲ್ಲಿ ಸಚಿವ ಚಲುವರಾಯಸ್ವಾಮಿ ಹೆಸರು ತಳಕು ಹಾಕಿಕೊಂಡ ಹಿನ್ನೆಲೆಯಲ್ಲಿ ಸಚಿವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಅಧಿವೇಶನದ ಮೊದಲ ದಿನದಿಂದಲೂ ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಹೋರಾಟ ನಡೆಸಿದ್ದರು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಇಲ್ಲದೇ ಇರುವ ಸಂದರ್ಭದಲ್ಲಿ ಜೆಡಿಎಸ್ ಪಕ್ಷವು ಏಕಾಂಗಿಯಾಗಿ ಹೋರಾಡಿದರ ಫಲವಾಗಿ ಇಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ತನಿಖೆ ನಡೆಸಲು ಸರಕಾರವು ಮುಂದಾಗಿದ್ದು, ಜೆಡಿಎಸ್ ಗೆ ಮೊದಲ ಜಯ ಸಿಕ್ಕಿದಂತಾಗಿದೆ.
![](https://i0.wp.com/newskadaba.com/wp-content/uploads/2022/12/Adiga-TVS.gif?resize=1024%2C658&ssl=1)
![](https://i0.wp.com/newskadaba.com/wp-content/uploads/2023/03/Unique-Computers.gif?w=1200&ssl=1)
![](https://i0.wp.com/newskadaba.com/wp-content/uploads/2023/06/Palvith-Dental-care-695x1024.gif?resize=352%2C517&ssl=1)