ಬೆಳ್ಳಾರೆ: ವಿದ್ಯಾರ್ಥಿಯ ಮೇಲೆ ಸುಳ್ಳಾರೋಪ

➤ ಉಪನ್ಯಾಸಕಿಯ ವಿರುದ್ದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು. 03. ಶಿಕ್ಷಕಿಯೋರ್ವರು ವಿದ್ಯಾರ್ಥಿಯೋರ್ವನ ಮೇಲೆ ಸುಳ್ಳು ಆರೋಪ ಹೊರಿಸಿ ಪೋಲೀಸರಿಗೆ ದೂರು ನೀಡಿದ್ದಾರೆಂದು ಪೆರುವಾಜೆಯ ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಉಪನ್ಯಾಸಕಿಯ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.

ದೀಕ್ಷಿತ್ ಎಂಬ ವಿದ್ಯಾರ್ಥಿ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ ಎಂದು ವಾಣಿಜ್ಯ ವಿಭಾಗದ ಉಪನ್ಯಾಸಕಿ ಸುನಿತಾ ನಾಯಕ್ ಅವರು ದೂರು ನೀಡಿದ್ದು, ಇದು ಸುಳ್ಳು ಎಂದು ಖಂಡಿಸಿರುವ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪನ್ಯಾಸಕಿ, ವಿದ್ಯಾರ್ಥಿ ತನ್ನ ವಿರುದ್ದ ಮೇಲಾಧಿಕಾರಿಗಳಿಗೆ ಸುಳ್ಳು ದೂರು ನೀಡುತ್ತಿದ್ದ, ಈ ಹಿನ್ನೆಲೆ ನಾನು ಪೋಲೀಸರಿಗೆ ದೂರು ನೀಡಿದ್ದೆ. ವಿದ್ಯಾರ್ಥಿಯ ಭವಿಷ್ಯಕ್ಕೆ ತೊಂದರೆ ಆಗಬಾರದೆನ್ನುವ ಉದ್ದೇಶದಿಂದ ಮುಚ್ಚಳಿಕೆ ಬರೆಸಿ ಕೇಸು ಹಿಂಪಡೆಯಲಾಗಿದೆ. ಇದೀಗ ಮತ್ತೆ ವಿದ್ಯಾರ್ಥಿಗಳನ್ನು ಸೇರಿಸಿ ದುರುದ್ದೇಶದಿಂದ ಪ್ರತಿಭಟನೆ ಮಾಡಿರುವುದಾಗಿ ತಿಳಿಸಿದ್ದಾರೆ.

Also Read  ಗಣಿ ಇಲಾಖೆಯ ಅಧೀನದಿಂದ ಕಡಲಾಚೆಯ ಪರಿಶೋಧನೆ- ವಿಚಾರ ಸಂಕಿರಣ
error: Content is protected !!
Scroll to Top