ಬಸ್ ನಿಲ್ಲಿಸದ ಕಾರಣ ಕೋಪದಿಂದ ಕಲ್ಲು ಎಸೆದ ಮಹಿಳೆ ➤ 5000 ರೂ. ದಂಡ

(ನ್ಯೂಸ್ ಕಡಬ) newskadaba.com ಕೊಪ್ಪಳ, ಜೂ. 26. ಮಹಿಳೆಯೊಬ್ಬರು ಬಸ್ ನಿಲ್ಲಿಸದ ಕಾರಣ ಸಿಟ್ಟಿಗೆದ್ದು ಸರ್ಕಾರಿ ಬಸ್ ಗೆ ಕಲ್ಲು ಎಸೆದ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ನಡೆದಿದೆ.

ಇಳಕಲ್ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬವರು ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನ ಪಡೆಯಲು ಹೊಗಿದ್ದ ವೇಳೆ ಹುಲಿಗೆ ಕ್ರಾಸ್ ಬಳಿ ತುಂಬಾ ಹೊತ್ತಿನಿಂದ ಕಾದರೂ ಯಾವುದೇ ಬಸ್ ನಿಲ್ಲಿಸಿರಲಿಲ್ಲ. ಇದರಿಂದ ಕೋಪಗೊಂಡ ಅವರು ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದ ಕೊಪ್ಪಳದಿಂದ-ಹೊಸಪೇಟೆಗೆ ಹೋಗುವ  ಬಸ್ ಗೆ ಕಲ್ಲು ಎಸೆದಿದ್ದರು. ಘಟನೆಗೆ ಸಂಬಂಧಿಸಿ ಬಸ್‌ ಚಾಲಕ ಕಲ್ಲೆಸೆದ ಮಹಿಳೆಯನ್ನು ಮುನಿರಾಬಾದ್‌ ಠಾಣೆಗೆ ಕರೆದುಕೊಂಡು ಹೋಗಿದ್ದು, ಈ ಸಂದರ್ಭ ಪೊಲೀಸರು ಮಹಿಳೆಯಿಂದ 5 ಸಾವಿರ ರೂ. ದಂಡ ಕಟ್ಟಿಸಿಕೊಂಡು ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.

Also Read  ಬಿದ್ದು ಸಿಕ್ಕಿದ 41 ಸಾವಿರ ರೂ.ಗಳು ಪೊಲೀಸರಿಗೆ ಹಸ್ತಾಂತರ ► ಪರರ ಸ್ವತ್ತು ತನಗೆ ಬೇಡವೆನ್ನುವ ಇವರ ಬಗ್ಗೆ ತಿಳಿಯಬೇಕೇ...?

 

error: Content is protected !!
Scroll to Top