ಪುಣ್ಚತ್ತಾರು: ನೇಣು ಬಿಗಿದು ಯುವತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜ.24. ಮೂರ್ಛೆ ರೋಗ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಯೋರ್ವಳು ತನ್ನ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಣಿಯೂರಿನಲ್ಲಿ ಬುಧವಾರದಂದು ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಾಕೆಯನ್ನು ಪುಣ್ಚತ್ತಾರು ಸಮೀಪದ ನೋಲ್ಮೆ ನಿವಾಸಿ ಕುಶಾಲಪ್ಪ ಗೌಡರ ಪುತ್ರಿ ಪವಿತ್ರ (19) ಎಂದು ಗುರುತಿಸಲಾಗಿದೆ. ಪುಣ್ಚತ್ತಾರು ಎಂಬಲ್ಲಿ ಟೈಲರಿಂಗ್ ವೃತ್ತಿ ನಿರ್ವಹಿಸುತ್ತಿದ್ದ ಪವಿತ್ರ ಬುಧವಾರದಂದು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆ ಛಾವಣಿಯ ಅಡ್ಡಕ್ಕೆ ಚೂಡಿದಾರ್ ಶಾಲು ಹಾಕಿ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಶಾಲಪ್ಪ ಗೌಡ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಅರಂತೋಡು: ಅಗಲಿದ ಸಮಸ್ತ ನೇತಾರರಿಗೆ ವಿಶೇಷ ಪ್ರಾರ್ಥನೆ

error: Content is protected !!
Scroll to Top