ಸರ್ವರ್ ಸಮಸ್ಯೆ ➤ ಜೂನ್ ಕೊನೆಯವರೆಗೆ ಪಡಿತರ ವಿತರಣೆಗೆ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 23. ಜೂನ್ ತಿಂಗಳ 28ರಿಂದ ಸರ್ವರ್ ನಿರ್ವಹಣಾ ಕಾರ್ಯ ಕೈಗೊಳ್ಳಲಿರುವ ಹಿನ್ನೆಲೆ ಪಡಿತರ ವಿತರಣೆಯನ್ನು ಜೂನ್ 27ರ ಒಳಗೆ ವಿತರಿಸಲು ಸರಕಾರ ಸೂಚಿಸಿತ್ತು. ಆದರೆ ಕಳೆದ ಮೂರು ದಿನಗಳಿಂದ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ವಿತರಣೆಗೆ ಅಡಚಣೆಯಾಗಿತ್ತು. ಇದನ್ನರಿತ ಸರಕಾರ ಈ ತಿಂಗಳ ಕೊನೆಯವರೆಗೆ ಪಡಿತರ ವಿತರಿಸಬೇಕೆಂದು ಸುತ್ತೋಲೆ ಹೊರಡಿಸಿದೆ.

error: Content is protected !!

Join the Group

Join WhatsApp Group