15 ಐಪಿಎಸ್ ಅಧಿಕಾರಿಗಳ ವರ್ಗಾವಣೆ ➤ ದ.ಕ‌. ಎಸ್ಪಿಯಾಗಿ ಸಿಬಿ ರಿಷ್ಯಂತ್ ನೇಮಕ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 20. ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ‌ರಾಗಿ ಸಿ.ಬಿ.ರಿಷ್ಯಂತ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ.


ಈ ಮೊದಲು ಎಸ್ಪಿಯಾಗಿದ್ದ ಡಾ.ಅಮಟೆ ವಿಕ್ರಂ ಅವರನ್ನು ವರ್ಗಾವಣೆ ಮಾಡಲಾಗಿದೆ. ಕಳೆದ ಕೆಲವು ದಿನಗಳಿಂದ ಡಾ ಅಮಟೆ ವಿಕ್ರಂ ಅವರು ರಜೆಯಲ್ಲಿದ್ದುದರಿಂದ ಸಿ.ಬಿ.ರಿಷ್ಯಂತ್ ಅವರು ಪ್ರಭಾರ ಎಸ್ಪಿಯಾಗಿ‌ ಕಾರ್ಯನಿರ್ವಹಿಸುತ್ತಿದ್ದರು. 2013ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದ ಇವರು, ಈ ಹಿಂದೆ ದಾವಣಗೆರೆಯ ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದರು. ವಿಧಾನಸಭೆ ಚುನಾವಣೆಗೂ ಮುನ್ನ ಬೆಂಗಳೂರಿನಲ್ಲಿ ನಿಯೋಜನೆಗೊಂಡಿದ್ದರು. ಬೆಂಗಳೂರಿನವರಾದ ಅವರು ಈ ಹಿಂದೆ ದ.ಕ., ಮೈಸೂರು, ಬಾಗಲಕೋಟೆ ಮತ್ತು ದಾವಣಗೆರೆಯ ಎಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು.

error: Content is protected !!

Join the Group

Join WhatsApp Group