ಸೌಜನ್ಯ ಕೊಲೆ ಪ್ರಕರಣ- ಸಂತೋಷ್ ರಾವ್ ದೋಷಮುಕ್ತ ➤ ತೀರ್ಪು ಪ್ರಕಟಿಸಿದ ಸಿಬಿಐ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಜೂ. 16. ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಬಿಐ ಕೋರ್ಟ್‌ ಇಂದು ತೀರ್ಪು ಪ್ರಕಟಿಸಿದ್ದು, ಆರೋಪಿ ಸಂತೋಷ್‌ ರಾವ್‌ ನಿರ್ದೋಷಿ ಎಂದು ಕೇಸಿನಿಂದ ಖುಲಾಸೆ ಮಾಡಿದೆ.

ಸಂತೋಷ್‌ ರಾವ್‌ ವಿರುದ್ದ ಸಲ್ಲಿಕೆಯಾಗಿರುವ ಸಾಕ್ಷ್ಯಾಧಾರಗಳಲ್ಲಿ ಕೊರತೆ ಇದೆ ಎನ್ನುವ ಕಾರಣಕ್ಕೆ ಆರೋಪಿಯನ್ನು ದೋಷ ಮುಕ್ತಗೊಳಿಸಿರುವುದಾಗಿ ನ್ಯಾಯಮೂರ್ತಿ ಸಿ ಬಿ ಸಂತೋಷ್‌ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಉಜಿರೆ ಎಸ್‌ ಡಿ ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾಳನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. 2012ರ ಅ. 10ರಂದು ಧರ್ಮಸ್ಥಳದ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು.

Also Read  ಜನವರಿ 1 ರಂದು ಸತ್ತ ವ್ಯಕ್ತಿ ಜೀವಂತವಾಗಿ ಪತ್ತೆ ► ಎಂಟು ತಿಂಗಳ ನಂತರ ಪ್ರತ್ಯಕ್ಷವಾದ ಸೆಕ್ಯೂರಿಟಿ ಗಾರ್ಡ್

error: Content is protected !!
Scroll to Top