ಮಟ್ಕಾ ದಂಧೆ- 7 ಮಂದಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಕುಂದಾಪುರ, ಜೂ. 15. ಮಟ್ಕಾ ದಂಧೆಗೆ ದಾಳಿ ನಡೆಸಿದ ಪೊಲೀಸರು ಒಟ್ಟು 7 ಮಂದಿಯನ್ನು ವಶಕ್ಕೆ ಪಡೆದ ಘಟನೆ ವರದಿಯಾಗಿದೆ.

ಬಂಧಿತರನ್ನು ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಹಾಲಾಡಿ ಮಾರ್ಕೇಟ್ ಬಳಿ ಕೆದೂರು ಬೆಳಗೋಡು ನಿವಾಸಿ ವಿಜಯ ಕುಮಾರ್(43) ಮತ್ತು ವಂಡಾರು ಗ್ರಾಮದ ಮಾವಿನಕಟ್ಟೆ ಬಸ್ಸು ನಿಲ್ದಾಣದ  ಬಳಿ ಮೊಗೆಬೆಟ್ಟುವಿನ ಕಾರ್ತಿಕ (24), ಕುಂದಾಪುರ ಠಾಣಾ ವ್ಯಾಪ್ತಿಯ ಸುಕೇಶ್ ಆಚಾರಿ(32), ಕೊಲ್ಲೂರು ಠಾಣಾ ವ್ಯಾಪ್ತಿಯ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಸಮೀಪ ಹಾಲ್ಕಲ್‌ನ ರಾಜೇಶ್ ಕುಮಾರ್(34), ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಾ ನಿವಾಸಿ ನಾರಾಯಣ (39), ಬೈಂದೂರು ಮೀನು ಮಾರ್ಕೇಟ್ ಬಳಿ ಸೂರ್ಕಂದದ ಭಾಸ್ಕರ ಶೆಟ್ಟಿ (54) ಮತ್ತು ಕಿರಿಮಂಜೇಶ್ವರ ಗ್ರಾಮದ ಅರೆಹೊಳೆ ಬೈಪಾಸ್ ರಿಕ್ಷಾ ನಿಲ್ದಾಣದ ಬಳಿ ಬಡಾಕೆರೆಯ ಶ್ರೀನಿವಾಸ ದೇವಾಡಿಗ (57) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ನಗದು ವಶಕ್ಕೆ ಪಡೆಯಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Also Read  ಭಾರೀ ಮಳೆಗೆ ಮನೆಯ ಛಾವಣಿ ಕುಸಿತ ➤ ಐವರು ಮಹಿಳೆಯರು ಮೃತ್ಯು

error: Content is protected !!
Scroll to Top