ಜಮೀನಿನಲ್ಲಿ ಮಲಗಿದ್ದವರ ಮೇಲೆ ಹರಿದ ಜೆಸಿಬಿ ➤ ಮೂವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ರಾಯಚೂರು, ಜೂ. 14. ಜೆಸಿಬಿ ಹರಿದು ಜಮೀನಿನಲ್ಲಿ ಮಲಗಿದ್ದ ಮೂವರು ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ನಿಲವಂಜಿ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಛತ್ತೀಸ್ ಗಢ ಮೂಲದ ವಿಷ್ಣು, ಶಿವರಾಂ ಹಾಗೂ ಬಲರಾಮ ಎಂದು ಗುರುತಿಸಲಾಗಿದೆ. ಇವರು ರಾತ್ರಿ ವೇಳೆ ಬೋರ್ ವೆಲ್ ಕೊರೆದು ಬಳಿಕ ಜಮೀನಿನಲ್ಲಿಯೇ ಮಲಗಿದ್ದರು. ಈ ಸಂದರ್ಭ ಬಂದ ಜೆಸಿಬಿಯು ಮೂವರ ಮೇಲೆ ಹರಿದಿದ್ದು, ಪರಿಣಾಮ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಾಜಿ ಸಿಎಂ ಜಯಲಲಿತಾರಿಂದ ವಶಪಡಿಸಿಕೊಂಡ ಅಮೂಲ್ಯ ವಸ್ತುಗಳು: ಫೆಬ್ರವರಿ 14-15ಕ್ಕೆ ತಮಿಳು ನಾಡು ಸರ್ಕಾರಕ್ಕೆ ಹಸ್ತಾಂತರಕ್ಕೆ ಆದೇಶ

error: Content is protected !!
Scroll to Top