ಮಂಗಳೂರು ಗಾಂಜಾ ಪೂರೈಕೆ ಪಕರಣ ➤ಕಾರಾಗೃಹದ ಸಿಬ್ಬಂದಿ ಅಮಾನತು

(ನ್ಯೂಸ್ ಕಡಬ) newskadaba.com.ಮಂಗಳೂರು, ಮೇ.25. ಕೈದಿಗೆ ಗಾಂಜಾ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟ ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹದ ಸಿಬ್ಬಂದಿ ಪ್ರಕಾಶ್ ಗಾವಡೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಕೈದಿಗಳ ಭೇಟಿಗೆ ಆಗಮಿಸುವ ಸಂಬಂಧಿಕರು ಮಾತ್ರವಲ್ಲದೇ, ಅಧಿಕಾರಿಗಳು, ಸಿಬ್ಬಂದಿಯನ್ನು ಕೆಐಎಸ್ಎಫ್ ಸಿಬ್ಬಂದಿ ನಿರಂತರ ತಪಾಸಣೆಗೆ ಒಳಪಡಿಸುತ್ತಿದ್ದು, ಅದರಂತೆ ತಪಾಸಣೆ ವೇಳೇ ಪ್ರಕಾಶ್ ಬಳಿ ಗಾಂಜಾ ಪತ್ತೆಯಾಗಿತ್ತು. ಈ ಬಗ್ಗೆ ಮೇ.11 ರಂದು ಬರ್ಕೆ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಈಗ ಅಮಾನತುಗೊಳಿಸಿ ಆದೇಶಿಸಲಾಗಿದೆ.

error: Content is protected !!

Join the Group

Join WhatsApp Group