ಉಳ್ಳಾಲ: ರೈಲ್ವೇ ಹಳಿ ದಾಟುವಾಗ ಅವಘಡ ➤ ರೈಲು ಢಿಕ್ಕಿ ಹೊಡೆದು ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com ಉಳ್ಳಾಲ, ಮೇ.22. ರೈಲು ಢಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಡ ಘಟನೆ ತೊಕ್ಕೊಟ್ಟು ಓಳಪೇಟೆ ಬಳಿ ನಡೆದಿದೆ.


ಬಿಹಾರ ಮೂಲದ ಶ್ರವಣ್ ದಾಸ್ (38) ಮೃತರು ಎಂದು ಗುರುತಿಸಲಾಗಿದೆ. ಶ್ರವಣ್ ದಾಸ್ ಮೂಲತಃ ಬಿಹಾರದವಾರಾಗಿದ್ದು, ತೊಕ್ಕೊಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ‌ ವಾಸಿಸುತ್ತಿದ್ದರು. ನಿನ್ನೆ ಕೆಲಸ ಮುಗಿಸಿ ಮನೆಗೆ ಬಂದು ಊಟಕ್ಕೆ ಸಾಂಬಾರ್ ತರಲೆಂದು ಹೊಟೇಲ್ ಗೆ ಹೋಗಿದ್ದು, ವಾಪಸ್ ಬರಲು ರೈಲ್ವೆ ಹಳಿ ದಾಟಿವಾಗ ರೈಲು ಢಿಕ್ಕಿ ಹೊಡೆದಿದೆ.

error: Content is protected !!
Scroll to Top