ಹಾವು ಕಡಿದು 27 ವರ್ಷದ ಯುವಕ ಮೃತ್ಯು..!

(ನ್ಯೂಸ್ ಕಡಬ)newskadaba.com ಧಾರವಾಡ, ಮೇ.22. ವಿಷಪೂರಿತ ಹಾವು ಕಡಿತದಿಂದಾಗಿ 27 ವರ್ಷದ ಯುವಕನೋರ್ವ ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ನಡೆದಿದೆ. ಶ್ರಿರಾಮನಗರ ನಿವಾಸಿ ಚೇತನ್ (27) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.


ವಿಷಕಾರಿ ಹಾವೊಂದು ಶ್ರಿರಾಮನಗರದ ತುಳಜಾ ಭವಾನಿ ದೇವಸ್ಥಾನದ ಬಳಿ ಹೋಗುತ್ತಿತ್ತು. ಇದನ್ನು ಕಂಡ ಚೇತನ್ ಹಾವನ್ನು ಹಿಡಿಯುವ ಸಲುವಾಗಿ ಅದರ ಸಮೀಪ ಹೋಗಿದ್ದಾರೆ. ಈ ವೇಳೆ ಚೇತನ್ ಗೆ ಹಾವು ಕಚ್ಚಿದೆ. ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹಾವು ಕಚ್ಚಿದ ತಕ್ಷಣ ಚೇತನ್ ಅವರನ್ನು ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚೇತನ್ ಮೃತಪಟ್ಟಿದ್ದಾರೆ.

Also Read  ಉತ್ತರ ಪ್ರದೇಶ: ಗ್ಯಾಸ್ ಸಿಲಿಂಡರ್‌ಗಳ ಸಾಗಿಸುತ್ತಿದ್ದ ಟ್ರಕ್‌ಗೆ ಹೊತ್ತಿಕೊಂಡ ಬೆಂಕಿ, ಭಾರೀ ಸ್ಫೋಟ

error: Content is protected !!
Scroll to Top