ಗುಡುಗು, ಮಿಂಚಿನಿಂದಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಾನಿ.!➤ರೈಲು ಸಂಚಾರ ರದ್ದು

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.22 ಗುಡುಗು ಮತ್ತು ಮಿಂಚಿನಿಂದಾಗಿ ಪುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ಗೆ ಹಾನಿಯಾಗಿದ್ದು ರೈಲು ಸಂಚಾರ ರದ್ದುಗೊಂಡಿದೆ. ಇದರಿಂದಾಗಿ ಹೌರಾ-ಪುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ರದ್ದುಗೊಳಿಸಲಾಗಿದೆ. ಗುಡುಗು ಮತ್ತು ಮಿಂಚಿನಿಂದಾಗಿ ಓವರ್ಹೆಡ್ ತಂತಿಗಳು ಹಾನಿಗೊಳಗಾಗಿದ್ದು ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಭಾರೀ ಮಳೆ ಗಾಳಿಗೆ ಒಂದೇ ಭಾರತ ರೈಲಿಗೆ ಹಾನಿಯುಂಟಾಗಿದೆ. ರೈಲಿನ ಮೇಲೆ ಮರಗಳು ಬಿದ್ದಿವೆ. ತಂತಿ ತುಂಡಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇದುವರೆಗೂ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಇಲ್ಲ.

 

error: Content is protected !!

Join the Group

Join WhatsApp Group