ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ ಮನೆ ಕಟ್ಟದೆ ₹2.65 ಕೋಟಿ ದುರ್ಬಳಕೆ.!

(ನ್ಯೂಸ್ ಕಡಬ)newskadaba.comಲಬುರಗಿ,ಮೇ.20 ಪ್ರಧಾನ ಮಂತ್ರಿ ಆವಾಸ್ (ನಗರ) ಯೋಜನೆಯಡಿ (ಪಿಎಂವೈ-ಯು) ಮಂಜೂರಾದ ಮನೆಗಳನ್ನು ನಿರ್ಮಿಸಿಕೊಳ್ಳದೇ ₹ 2.65 ಕೋಟಿ ಅನುದಾನ ದುರ್ಬಳಕೆಯಾದ ಬಗ್ಗೆ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ವಸತಿ ಇಲಾಖೆ ಅಧಿಕಾರಿಗಳ ತಂಡ ತನಿಖೆ ನಡೆಸಲು ಅಫಜಲಪುರಕ್ಕೆ ಭೇಟಿ ನೀಡಿದೆ.

‘2019-20 ಅವಧಿಯಲ್ಲಿ ಅಫಜಲಪುರದ 266 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿತ್ತು. ಅವರಲ್ಲಿ 200 ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಒಂದೂವರೆ ವರ್ಷದ ಅವಧಿಯಲ್ಲಿ ₹2.65 ಕೋಟಿ ಅನುದಾನ ಪಾವತಿ ಆಗಿತ್ತು. ಭುವನ್ ಆಯಪ್‌ನಲ್ಲಿ ನಮೂದಿಸಿದ್ದ ವಸತಿ ಪ್ರದೇಶಕ್ಕೆ ತೆರಳಿ ಪರಿಶೀಲಿಸಿದಾಗ, ಅಲ್ಲಿ ಮನೆಗಳು ನಿರ್ಮಾಣ ಆಗದಿರುವುದು ಕಂಡು ಬಂತು’ ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದರು.

 

Also Read  ಮಹಾಕುಸಿತಕ್ಕೆ ತುತ್ತಾಗುವ ಭೀತಿಯಲ್ಲಿ ಚಾರ್ಮಾಡಿ ಘಾಟ್

error: Content is protected !!
Scroll to Top