ಕೇಂದ್ರ ಸಚಿವರ ಬೆಂಬಲಿಗರಿಂದ ಶಾಸಕರಿಗೇ ಜೀವಭಯ..!➤ ದೂರು ನೀಡಲು ನಿರ್ಧರಿಸಿದ ಶಾಸಕರು

(ನ್ಯೂಸ್ ಕಡಬ)newskadaba.com ಬೀದರ್,ಮೇ.18 ಕೇಂದ್ರ ಸಚಿವರಿಂದ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಿಗೇ ಜೀವಭಯ ಇದೆ ಎನ್ನಲಾದ ಪ್ರಕರಣ ಕೇಳಿಬಂದಿದ್ದು, ಸಚಿವರ ವಿರುದ್ಧ ಪೊಲೀಸ್ ಉನ್ನತಾಧಿಕಾರಿಗಳಿಗೆ ದೂರು ನೀಡಲು ಶಾಸಕರು ನಿರ್ಧಾರ ಮಾಡಿದ್ದಾರೆ.ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಈ ಆರೋಪ ಕೇಳಿ ಬಂದಿದ್ದು, ಆರೋಪಿಸಿರುವ ಶಾಸಕ ಪ್ರಭು ಚವ್ಹಾಣ ದೂರು ನೀಡಲು ನಿರ್ಧರಿಸಿದ್ದಾರೆ.

ಕೇಂದ್ರ ಸಚಿವ ಭಗವಂತ ಖೂಬಾ ಒಂದು ವರ್ಷದಿಂದ ನನ್ನ ವಿರುದ್ಧ ಕುತಂತ್ರ ಮಾಡುವ ಮೂಲಕ ಚುನಾವಣೆಯಲ್ಲಿ ನನನ್ನು ಸೋಲಿಸಲು ಕಾರಣರಾಗಿದ್ದಾರೆ. ಮಾತ್ರವಲ್ಲ, ಕೇಂದ್ರ ಸಚಿವರ ಬೆಂಬಲಿಗರಿಂದ ನನಗೆ ಜೀವಭಯ ಇದೆ. ಈ ಕುರಿತು ಎಸ್​ಪಿ, ಐಜಿಗೆ ದೂರು ನೀಡಲು ನಿರ್ಧರಿಸಿದ್ದಾಗಿ ಅವರು ತಿಳಿಸಿದ್ದಾರೆ.

 

.

 

error: Content is protected !!

Join the Group

Join WhatsApp Group