ಸುಬ್ರಹ್ಮಣ್ಯ: ಬಸ್ ನಿಲ್ದಾಣದ ಬಳಿ ತಿರುಗಾಡುತ್ತಿದ್ದ ಅಪರಿಚಿತ ಮಹಿಳೆ ಮತ್ತು ಬಾಲಕಿಯನ್ನು ರಕ್ಷಣಾ ಕೇಂದ್ರಕ್ಕೆ ಕಳುಹಿಸಿದ ಪೊಲೀಸರು

 (ನ್ಯೂಸ್ ಕಡಬ) newskadaba.com. ಸುಬ್ರಹ್ಮಣ್ಯ, ಮೇ.12. ಸುಬ್ರಹ್ಮಣ್ಯ ವ್ಯಾಪ್ತಿಯ ಏನೆಕಲ್ಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ಅಪರಿಚಿತ ಬಾಲಕಿ ಮತ್ತು ಮಹಿಳೆಯೊಬ್ಬರನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಿಸಿ ರಕ್ಷಣಾ ಕೇಂದ್ರಕ್ಕೆ ಕಳುಹಿಸಿದ ಘಟನೆ ಸುಬ್ರಹ್ಮಣ್ಯದಿಂದ ವರಾದಿಯಾಗಿದೆ.

ಸಾರ್ವಜನಿಕರ ಮಾಹಿತಿ ಮೇರೆಗೆ ಏನೆಕಲ್ಲು ಬಸ್ ನಿಲ್ದಾಣ ಸಮೀಪ ತಿರುಗಾಡುತ್ತಿದ್ದ ಹಿಂದೆ ಭಾಷಿಕ ಮಹಿಳೆ ಹಾಗೂ ಬಾಲಕಿಯನ್ನು ಪೊಲೀಸರು ವಿಚಾರಿಸಿದ್ದರು. ಈ ವೇಳೆ ಎಣ್ಮೂರು ಭಾಗದವರು ಎಂದು ಅಸಮರ್ಪಕ ಮಾಹಿತಿ ನೀಡಿದ್ದರು.ಇದರಿಂದ ಅನುಮಾನಗೊಂಡ ಪೊಲೀಸರು ಠಾಣೆಗೆ ಕರೆತಂದು ವಿಚಾರಿಸಿದ್ದಾರೆ.

error: Content is protected !!
Scroll to Top