ವಿಧಾನಸಭೆ ಚುನಾವಣೆ ಹಿನ್ನೆಲೆ➤ಮತದಾನ ಮಾಡದಿದ್ದರೆ ವೇತನ ಕಡಿತ..!

(ನ್ಯೂಸ್ ಕಡಬ)Newskadaba.com ತುಮಕೂರು, ಮೇ.10ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ, ಖಾಸಗಿ ಸಂಸ್ಥೆಗಳ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ಚುನಾವಣಾ ಆಯೋಗ ಗರಿಷ್ಠ ಮತದಾನಕ್ಕೆ ಕ್ರಮ ಕೈಗೊಂಡಿದ್ದು, ಇದನ್ನು ಸಾಕಾರಗೊಳಿಸಲು ಕೈಗಾರಿಕೋದ್ಯಮಿಗಳು ವೇತನ ಸೂತ್ರ ಕೈಗೊಂಡಿದ್ದಾರೆ.

ಮತದಾನ ಮಾಡದಿದ್ದರೆ ವೇತನ ಕಡಿತಗೊಳಿಸಲು ಕೈಗಾರಿಕಾ ಸಂಘ ಸಂಸ್ಥೆಗಳು, ಕೈಗಾರಿಕೋದ್ಯಮಗಳು ತೀರ್ಮಾನ ಕೈಗೊಂಡಿವೆ. ಕೆಲಸಕ್ಕೆ ರಜೆ ಎಂದು ಊರು, ಪ್ರವಾಸಕ್ಕೆ ಹೊರಟರೆ ಅಂದಿನ ವೇತನ ನೀಡುವುದಿಲ್ಲ ಎಂದು ಉದ್ಯಮಿಗಳು ತಿಳಿಸಿದ್ದಾರೆ.

 

 

 

 

Scroll to Top