16 ವರ್ಷದ ಬಾಲಕನಿಗೆ ಚೂರಿಯಿಂದ ಇರಿತ ➤ ಬಾಲಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತ್ಯು

(ನ್ಯೂಸ್ ಕಡಬ)newskadaba.com ನವದೆಹಲಿ, ಮೇ.09. ಈಶಾನ್ಯ ದೆಹಲಿಯ ವೆಲ್ಕಮ್ ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ 16 ವರ್ಷದ ಬಾಲಕನನ್ನು ಇನ್ನೊಬ್ಬ ಬಾಲಕ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಜಂತಾ ಕಾಲೋನಿಯಲ್ಲಿ ಬಾಲಕನ ಹೊಟ್ಟೆಗೆ ಇರಿದ ಬಗ್ಗೆ ಪೊಲೀಸ್ ಠಾಣೆಗೆ ಕರೆ ಬಂದಿತ್ತು. ನಂತರ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿತು. ಗಾಯಾಳು ಬಾಲಕನಿಗೆ ಪೋಷಕರು ಜಿಟಿಬಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರು ಸುಮಾರು ಮುಂಜಾನೆ 3.19 ರ ವೇಳೆಗೆ ಸಾವು ಘೋಷಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಮೃತ ಬಾಲಕನಿಗೆ ಏಳರಿಂದ ಎಂಟು ಬಾರಿಚೂರಿಯಿಂದ ಇರಿಯಲಾಗಿದೆ‌ ಎಂದು ಹೇಳಲಾಗಿದೆ.

Also Read  ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ಬಿಗ್ ಶಾಕ್ ➤ಚುನಾವಣೆ ನೀತಿ ಸಂಹಿತೆ ಮುಗಿದರೂ ವರ್ಗಾವಣೆ ಭಾಗ್ಯ ಇಲ್ಲ

 

error: Content is protected !!
Scroll to Top