(ನ್ಯೂಸ್ ಕಡಬ)newskadaba.com ಕೊಡಗು, ಮೇ.08. ಕೊಡಗಿನ ನಿವಾಸಿ ಯುವಕನೋರ್ವ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಸೋಮವಾರಪೇಟೆ ಕಿರಗಂದೂರುವಿನ ರುಕ್ಮಿಣಿ ಹಾಗೂ ಶಿವಪ್ಪ ಅವರ ಪುತ್ರ ಜಿತಿನ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ವರದಿ ತಿಳಿಸಿದೆ. ಜಿತಿನ್ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.









