ಜಾತಿ ಹೆಸರು ಬಳಸಿ ಭಾಷಣ ಮಾಡಿದ ಬಿಜೆಪಿ ಅಭ್ಯರ್ಥಿ ಎಸ್​.ತಿಪ್ಪೇಸ್ವಾಮಿ..! ➤ದೂರು ದಾಖಲು

(ನ್ಯೂಸ್ ಕಡಬ)Newskadaba.com ಚಿತ್ರದುರ್ಗ,ಮೇ.04 ವಿಧಾನ ಸಭೆ ಚುನಾವಣಾ ಅಬ್ಬರದ ಪ್ರಚಾರದ ಭರದಲ್ಲಿ ಜಾತಿ ಹೆಸರು ಬಳಸಿ ಭಾಷಣ ಮಾಡಿದ ಆರೋಪದ ಮೆರೆಗೆ ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ವಿರುದ್ಧ ಚುನಾವಣಾಧಿಕಾರಿಯಿಂದ ದೂರು ದಾಖಲಾಗಿದೆ.ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ತೆಂಗಿನ ಗೌರಸಮುದ್ರದಲ್ಲಿ ಮಾತನಾಡಿ ಅವರು, ‘ನಾನು ಮ್ಯಾಸನಾಯಕ, ಕಾಂಗ್ರೆಸ್​​ ಅಭ್ಯರ್ಥಿ ಊರ ನಾಯಕ, ನಮಗೂ ಅವರಿಗೂ ಸಂಬಂಧ ಇಲ್ಲ ಎಂದಿದ್ದರು.

ಭಾಷಣ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಜಾತಿಯ ಹೆಸರು ಬಳಸಿ ಭಾಷಣ ಮಾಡಿ ಬಿಜೆಪಿ ಅಭ್ಯರ್ಥಿ ಎಸ್​.ತಿಪ್ಪೇಸ್ವಾಮಿ ನೀತಿಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪದ ಮೆರೆಗೆ ಚುನಾವಣಾಧಿಕಾರಿ ಗಳು ದೂರು ದಾಖಲಿಸಿದ್ದಾರೆ. ಈ ವಿಚಾರವೂ ಚುನಾವಣಾಧಿಕಾರಿಗಳ ಪರಿಶೀಲನೆಗಳ ಬಳಿಕ ಮಾಹಿತಿ ಬಹಿರಂಗವಾಗಿದೆ ಎಂದು ವರದಿಯಾಗಿದೆ.

Also Read  ಜಲಪಾತ ವೀಕ್ಷಣೆಗೆ ಹೋಗಿದ್ದ ಯುವಕ ನೀರುಪಾಲು- ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆ

 

 

 

 

 

error: Content is protected !!
Scroll to Top