ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಫುಡ್ ಡೆಲಿವರಿ ಬಾಯ್ ದರೋಡೆ ಮಾಡಿದ ದುಷ್ಕರ್ಮಿಗಳು!

(ನ್ಯೂಸ್ ಕಡಬ) newskadaba.com. ಬೆಂಗಳೂರು, ಮೇ.3. ಗ್ರಾಹಕರ ಸೋಗಿನಲ್ಲಿ ಮೂವರು ದುಷ್ಕರ್ಮಿಗಳು ಫುಡ್ ಡೆಲಿವರಿ ಬಾಯ್’ನನ್ನು ದರೋಡೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಆನ್ ಲೈನ್ ಮೂಲಕ ಆರೋಪಿಗಳು ಫುಡ್ ಆರ್ಡರ್ ಮಾಡಿದ್ದಾರೆ. ಇದರಂತೆ ಎ ಇಂದದೂರ್ ಎಂಬ ಫುಡ್ ಡೆಲಿವರಿ ಬಾಯ್ ಆಹಾರ ತಲುಪಿಸಲು ಸರ್ಜಾಪುರ ರಸ್ತೆಗೆ ಹೋಗಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಆತನಿಗೆ ಕಿರುಕುಳ ನೀಡಿದ್ದು. ಬೆದರಿಕೆ ಹಾಗಿ ಆತನ ಖಾತೆಯಲ್ಲಿದ್ದ ರೂ.3,000ಯನ್ನು ಯುಪಿಐ ಮೂಲಕ ವರ್ಗಾಯಿಸಿಕೊಂಡಿದ್ದಾರೆ.

ಬಳಿಕ ಡೆಲಿವರಿ ಬಾಯ್ ಬಳಿಯಿದ್ದ ಮೊಬೈಲ್ ಫೋನ್’ನ್ನೂ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಸಂತ್ರಸ್ತ ವ್ಯಕ್ತಿ ಬೆಳ್ಳಂದೂರು ಪೊಲೀಶ್ ಠಾಣೆಗೆ ದೂರು ನೀಡಿದ್ದಾರೆ.

error: Content is protected !!

Join the Group

Join WhatsApp Group