ಡಿಕೆಶಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಭೂಸ್ಪರ್ಶ ➤ ತಪ್ಪಿದ ಅವಘಡ

(ನ್ಯೂಸ್ ಕಡಬ) newskadaba.com, ಬೆಂಗಳೂರು, ಮೇ.2. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶವಾಗಿದೆ. ಹೆಚ್‌ಎಎಲ್‌ನಿಂದ ಮುಳಬಾಗಿಲಿಗೆ ಡಿಕೆಶಿ ತೆರಳುತ್ತಿದ್ದರು. ಈ ವೇಳೆ ರಣಹದ್ದು ಬಡಿದಿದ್ದು, ಕಾಪ್ಟರ್‌ನ ವಿಂಡ್ ಶೀಲ್ಡ್ ಗಾಜು ಪುಡಿಪುಡಿಯಾಗಿದೆ. ಆದ್ದರಿಂದ ಕಾಪ್ಟರ್‌ ಅನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ.  ಡಿಕೆಶಿ ಮುಳಬಾಗಿಲಿಗೆ ರಸ್ತೆ ಮಾರ್ಗದ ಮೂಲಕ ತೆರಳಿದ್ದಾರೆ ಎನ್ನಲಾಗಿದೆ.

ಶಿವಕುಮಾರ್ ಮತ್ತು ಪೈಲಟ್ ಜೊತೆಗೆ ಅವರನ್ನು ಸಂದರ್ಶಿಸುತ್ತಿದ್ದ ಕನ್ನಡ ಸುದ್ದಿ ವಾಹಿನಿಯೊಂದರ ಪತ್ರಕರ್ತರು ಹೆಲಿಕಾಪ್ಟರ್‌ನಲ್ಲಿದ್ದರು. ಶಿವಕುಮಾರ್, ಹೆಲಿಕಾಪ್ಟರ್‌ನಲ್ಲಿದ್ದ ಸಿಬ್ಬಂದಿ ಮತ್ತು ಇತರರು ಸುರಕ್ಷಿತವಾಗಿದ್ದಾರೆ. “ಇದೊಂದು ಆಕಸ್ಮಿಕ ಘಟನೆಯಾಗಿದ್ದು, ನಾವೆಲ್ಲರೂ ಬದುಕಿ ಬಂದಿದ್ದೆ ಅದೃಷ್ಟ, ಎಲ್ಲರೂ ಸುರಕ್ಷಿತರಾಗಿದ್ದು ಯಾರು ಆತಂಕ ಪಡಬೇಕಾಗಿಲ್ಲಎಂದು ಅಪಘಾತದ ನಂತ್ರ ಡಿಕೆಶಿ ಹೇಳಿಕೆ ನೀಡಿದ್ದಾರೆ.

Scroll to Top