ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಮಳೆಯಿಂದಾಗಿ ಅಸ್ತವ್ಯಸ್ತ.!

(ನ್ಯೂಸ್ ಕಡಬ)Newskadaba.com ರಾಮನಗರ,ಮೇ.02 ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದ್ದು, ಇದರಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಗನಬಸವನ ದೊಡ್ಡಿ ಅಂಡರ್‌ಪಾಸ್‌ ಬಳಿ ಸಂಚಾರ ದಟ್ಟಣೆ ಉಂಟಾಯಿತು.ಅಂಡರ್‌ಪಾಸ್ ಬಳಿ ಸರ್ವಿಸ್ ರಸ್ತೆಯಲ್ಲಿ ಮತ್ತೆ ಅಲ್ಪ ಪ್ರಮಾಣದಲ್ಲಿ ನೀರು ನಿಂತಿದ್ದು, ನೀರನ್ನು ಹೊರ ಹಾಕುವ ಕಾರ್ಯ ನಡೆದಿತ್ತು.

ಇದರಿಂದಾಗಿ ಬೈಕ್‌ಗಳು ಎಕ್ಸ್‌ಪ್ರೆಸ್‌ ವೇನಲ್ಲಿಯೇ ಸಂಚಾರ ಕೈಗೊಂಡವು. ಮಳೆ ಬಂದ ಸಂದರ್ಭ ಮೇಲ್ಸೆತುವೆ ಕೆಳಗೆ 50ಕ್ಕೂ ಹೆಚ್ಚು ಬೈಕ್‌ ಸವಾರರು ಆಶ್ರಯ ಪಡೆದರು. ಇದರಿಂದಾಗಿ ಹೆದ್ದಾರಿಯಲ್ಲಿ ಕಿ.ಮೀ. ಉದ್ದಕ್ಕೆ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಸಂಚಾರ ದಟ್ಟಣೆಯಿಂದ ವಾಹನ ಸವಾರರು ಪರದಾಡಿದರು.

Also Read  ಮೂವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ನಾಪತ್ತೆ

 

 

error: Content is protected !!
Scroll to Top