ಮ್ಯಾನ್ ಹೋಲ್ ಗೆ ಬಿದ್ದು ಬಾಲಕಿ ಮೃತ್ಯು   ➤ಜಿಎಚ್‌ಎಂಸಿ ಸಿಬ್ಬಂದಿಯ ವಿರುದ್ಧ ಸ್ಥಳೀಯರ ಆಕ್ರೋಶ.!

(ನ್ಯೂಸ್ ಕಡಬ)Newskadaba.com ಸಿಕಂದರಾಬಾದ್,ಏ.29 ಜಿಎಚ್‌ಎಂಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಾಲಕಿ ಮೌನಿಕಾ ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಸಿಕಂದರಾಬಾದ್ ವ್ಯಾಪ್ತಿಯ ಕಲಾಸಿಗುಡದಲ್ಲಿ ನಡೆದಿದೆ. ಮೌನಿಕಾ ಸ್ಥಳೀಯ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾಳೆ.ಮುಂಜಾನೆ ಹಾಲಿನ ಪ್ಯಾಕೆಟ್‌ಗಾಗಿ ಹೊರಗೆ ಹೋದ ಮೌನಿಕಾ ನಾಪತ್ತೆಯಾಗಿದ್ದಾಳೆ.

ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದು, ಇದನ್ನು ಗಮನಿಸದೆ ಬಾಲಕಿ ಗುಂಡಿಗೆ ಬಿದ್ದಿದ್ದಾಳೆ.ಮೌನಿಕಾ ನಾಪತ್ತೆಯಾಗುತ್ತಿದ್ದಂತೆ ಹುಡುಕಾಟ ಆರಂಭಿಸಿದರು. ಡಿಆರ್‌ಎಫ್ ಸಿಬ್ಬಂದಿ ಮೌನಿಕಾ ಮೃತದೇಹವನ್ನು ಪಾರ್ಕ್‌ಲೈನ್‌ನಲ್ಲಿ ಪತ್ತೆ ಮಾಡಿದ್ದಾರೆ. ಮಗುವಿನ ಸಾವಿಗೆ ಕಾರಣ ಜಿಎಚ್‌ಎಂಸಿ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Also Read  ನರೇಂದ್ರ ಮೋದಿಯವರಿಗೆ ಶುಭಹಾರೈಸಿದ ಶ್ರೀಲಂಕಾ ಪ್ರಧಾನಿ

 

 

error: Content is protected !!
Scroll to Top