ಪ್ರಚಾರದ ವೇಳೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮೇಲೆ ಕಲ್ಲು ತೂರಾಟ

(ನ್ಯೂಸ್ ಕಡಬ)newskadaba.com ಕೊರಟಗೆರೆ, ಏ.29. ಕೊರಟಗೆರೆ ತಾಲೂಕಿನ ಬೈರನಹಳ್ಳಿ ಕ್ರಾಸ್ ಬಳಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಮೇಲೆ ಕಲ್ಲು ತೂರಾಟ ನಡೆದಿದೆ.

ಕಲ್ಲೇಟಿನಿಂದಾಗಿ ಪರಮೇಶ್ವರ್‌ ಅವರ ತಲೆಗೆ ಗಾಯವಾಗಿದ್ದು ಸಮೀಪದ ಅಕ್ಕಿರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿಗೆ ಕರೆದೊಯ್ಯಲಾಗಿದೆ. ಇನ್ನು ಪ್ರಚಾರದ ಸಮಯದಲ್ಲಿ ಕಾರ್ಯಕರ್ತರು ಡಾ.ಜಿ. ಪರಮೇಶ್ವರ್ ಅವರನ್ನು ಎತ್ತಿಕೊಂಡು ಹೂ ಮಳೆ ಸುರಿಸಿದ್ದಾರೆ, ಈ ವೇಳೆ ಅವುಗಳ ನಡುವೆ ತೂರಿಬಂದ ಕಲ್ಲೊಂದು ಪರಮೇಶ್ವರ್ ಅವರ ತಲೆಗೆ ಬಡಿದು ರಕ್ತಸ್ರಾವವಾಗಿದೆ.

Also Read  ವಿಕೆಟ್ ದಾಖಲೆ ವೀರ ರಾಜಿಂದರ್ ಗೋಯೆಲ್ ವಿಧಿವಶ

 

 

error: Content is protected !!