ಕಾರು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ➤ ಕತ್ತೆಯ ಮೂಲಕ ಕಾರನ್ನು ಶೋರೂಂಗೆ ಎಳೆದು ತಂದ ಮಾಲೀಕ.!

(ನ್ಯೂಸ್ ಕಡಬ)Newskadaba.com ರಾಜಸ್ಥಾನ,ಏ.27 ಕಾರು ಮಾಲೀಕ ರಾಜ್‌ಕುಮಾರ್‌ ಉದಯಪುರದ ಮದ್ರು ಕೈಗಾರಿಕಾ ಪ್ರದೇಶದ ಶೋರೂಂ ಒಂದರಲ್ಲಿ ಸುಮಾರು ₹18 ಲಕ್ಷ ಕೊಟ್ಟು ಹೊಸ ಕಾರು ಖರೀದಿಸಿದ್ದರು.

ದುಬಾರಿ ಹಣಕೊಟ್ಟು ಖರೀದಿಸಿದ ಕಾರು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಆಕ್ರೋಶಗೊಂಡ ಮಾಲೀಕ ಕತ್ತೆ ಮೂಲಕ ಕಾರನ್ನು ಶೋ ರೂಂಗೆ ಎಳೆದು ತಂದು ಪ್ರತಿಭಟನೆ ಮಾಡಿದ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.  ಕಾರನ್ನು ಹಗ್ಗದ ಸಹಾಯದಿಂದ ಎರಡು ಕತ್ತೆಗಳ ಕೊರಳಿಗೆ ಕಟ್ಟಿ, ಡೋಲು ಬಾರಿಸುತ್ತಾ ಶೋಂ ರೂಮ್‌ ಕಡೆ ಬರುತ್ತಿರುವ ದೃಶ್ಯದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Also Read  ಪತಿಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಪತ್ನಿ.!➤ಆರೋಪಿ ಅರೆಸ್ಟ್

 

 

error: Content is protected !!
Scroll to Top