ಕೇದಾರನಾಥ ಯಾತ್ರೆ ಏ.25ರಿಂದ ಆರಂಭ..!   ➤ ಟೋಕನ್‌ ವ್ಯವಸ್ಥೆ ಜಾರಿ!

(ನ್ಯೂಸ್ ಕಡಬ)Newskadaba.com ಉಡುಪಿ,ಏ.20  ಕೇದಾರನಾಥ ಯಾತ್ರೆ ಇದೇ 25ರಿಂದ ಆರಂಭಗೊಳ್ಳಲಿದ್ದು, ಈ ಬಾರಿ ದಿನವೊಂದಕ್ಕೆ 13 ಸಾವಿರ ಯಾತ್ರಿಕರ ಭೇಟಿಗಷ್ಟೇ ಅನುಮತಿ ನೀಡಲಾಗಿದೆ.’ಸರ್ಕಾರ ಈ ಬಾರಿ ಯಾತ್ರಾರ್ಥಿಗಳಿಗೆ ಟೋಕನ್‌ ವ್ಯವಸ್ಥೆಯನ್ನೂ ಪರಿಚಯಿಸಿದೆ.

ಸುಗಮ ಯಾತ್ರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ರುದ್ರಪ್ರಯಾಗ್‌ ಜಿಲ್ಲಾಧಿಕಾರಿ ಮಯೂರ್‌ ದೀಕ್ಷಿತ್‌ ಸುದ್ದಿಗಾರರಿಗೆ ತಿಳಿಸಿದರು.12 ವೈದ್ಯಕೀಯ ಶಿಬಿರ ತೆರೆಯಲಾಗಿದೆ. ಆರು ಆಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸಲಿವೆ. ತುರ್ತು ನೆರವಿಗಾಗಿ ಏರ್‌ ಆಂಬುಲೆನ್ಸ್‌ ಸೇವೆಗೂ ಸರ್ಕಾರ ಅನುಮತಿ ನೀಡಿದೆ ಎಂದು ವಿವರಿಸಿದರು.

Also Read  ಚೂರಿಯಿಂದ ಇರಿದು ಯುವಕನ ಕೊಲೆ  

 

error: Content is protected !!
Scroll to Top